ಹೆಚ್.ಡಿ. ದೇವೇಗೌಡರ
ಹೋರಾಟ ಮನೋಭಾವ
ಎಲ್ಲರೂ ಬಲ್ಲ
ಸಂಗತಿ. ನಾಲ್ಕು
ದಶಕಗಳಿಂದಲೂ
ಸಾರ್ವಜನಿಕ ಬದುಕಿನಲ್ಲಿ
ತಮ್ಮ ಬದ್ಧತೆ,
ಸ್ವಾಭಿಮಾನ ಮತ್ತು
ಜನಪರ ಕಾಳಜಿಯ
ಹೋರಾಟದಿಂದ ತಮ್ಮದೇ
ಆದ ಭಾಪು ಮೂಡಿಸಿರುವವರು
ದೇವೇಗೌಡರು,
ಕರ್ನಾಟಕ ರಾಜ್ಯದ
ಮುಖ್ಯಮಂತ್ರಿಯಾಗಿ,
ಪ್ರಧಾನ ಮಂತ್ರಿಯಾಗಿ
ಬೆಂಗಳೂರು ನಗರಕ್ಕೆ
ನೀಡಿದ ಕೊಡುಗೆ,
ಮಾಡಿದ ಅಭಿವೃದ್ಧಿ
ಕಾರ್ಯಗಳ ಒಂದು
ಪಕ್ಷಿನೋಟ ಈ
ಹೊತ್ತಿಗೆಯಲ್ಲಿದೆ.
ಬೆಂಗಳೂರು ನಗರದ
ಜನರು ಮರೆತಿರಬಹುದಾದ
ಸಂಗತಿಗಳನ್ನು
ಜ್ಞಾಪಿಸುವ ಉದ್ದೇಶ
ಈ ಪುಸ್ತಕದ್ದು.
ದೇವೇಗೌಡರು
ಮುಖ್ಯಮಂತ್ರಿಯಗಿದ್ದಾಗ
ರಾಜ್ಯದ ಹಣಕಾಸು
ಖಾತೆಯ ಜವಾಬ್ದಾರಿಯನ್ನು
ಸಮರ್ಥವಾಗಿ ನಿರ್ವಹಿಸಿದವರು
ಶ್ರೀ. ಸಿದ್ದರಾಮಯ್ಯನವರು.
ಕಾಂಗ್ರೆಸ್
ಸರ್ಕಾರ ಅಧಿಕಾರ
ಕಳೆದುಕೊಂಡು,
ಸಿದ್ದರಾಮಯ್ಯನವರು
ದೇವೇಗೌಡರ ಸಂಪುಟದಲ್ಲಿ
ಅರ್ಥ ಸಚಿವರಾದಾಗ
ಇದ್ದ ರಾಜ್ಯದ
ಹಣಕಾಸಿನ ಪರಿಸ್ಥಿತಿ
ತುಂಬಾ ಶೋಚನೀಯ.
|